ಪ್ರಾರ್‍ಥನೆ

ಯಾರೋ ಬಂದರು ಯಾರೋ ಹೋದರು
ಗೋಡೆ ಮೇಲೆಲ್ಲ ನೆರಳು,
ಚಲಿಸಿದಂತಾಗಿ ಕುತ್ತಿಗೆ ಬೆನ್ನೊಳು
ಯಾರದೋ ನುಣುಪು ಬೆರಳು,
ಬಂದಿದ್ದರು, ನಿಂತಿದ್ದರು, ನುಡಿಸಲು
ಎಣಿಸಿದ್ದರು ಎಂಬ
ಭಾವವೊಂದೆ ಉಳಿದಿದೆ, ಕತ್ತೆತ್ತಲು
ಏನಿದೆ, ಬರಿಬಯಲು!

ಹೂ ಪರಿಮಳ ಹಾಯಾಗಿ ಹಬ್ಬುತಿದೆ
ಇಡಿಕೊಠಡಿಯ ತುಂಬ;
ಜರಿವಸ್ತ್ರದ ಸರಪರಸದ್ದಿನ್ನೂ
ನಿಂತಿದೆ ಕಿವಿತುಂಬ;
ತಾಯಿಕೈಯ ನೇವರಿಕೆಯೆ, ಆದರು
ತಲೆಯನೆತ್ತಲಿಲ್ಲ,
ಕರುಣೆ ತೋರಿ ಬಳಿ ಬಂದಿರೆ ದಿನವೂ
ನಮಿಸಿದ ಪ್ರತಿಬಿಂಬ.

ನೀವು ಬಂದಾಗ ಕರೆಯಲಿಲ್ಲೆಂದು
ಕೋಪವೇನು ನಿಮಗೆ?
ಕೊಡಿ ಎಂದು ನಯ ನುಡಿಯಲಿಲ್ಲ
ಬೇರಾಯಿತೆ ನಿಮ್ಮ ಬಗೆ?
ಏತರಲೋ ಹೂತಿತ್ತು ಮನಸು, ಬರಿ
ಕಾತರ ಕನವರಿಕೆ;
ಮಂಕು ಮುಚ್ಚಿ ತಪ್ಪಿದೆ ನಿಜ, ಅಷ್ಟಕೆ
ಹೊರಟೇ ಬಿಡುವುದೆ ಹೊರಕೆ?

ಬನ್ನಿ ಕಾದಿರುವ ನಿಮ್ಮದೇ ಧ್ಯಾನ
ಶಬರಿಯ ಹಂಬಲಿಕೆ,
ಲೌಕಿಕದಲಿ ಬಗೆದೈವವ ಮರೆತೆನು
ಶಪಿಸಬೇಡಿ ಅದಕೆ.
ಸ್ವಪ್ನಚಿತ್ತರನು ಯಾರು ದೂರುವರು
ಕಂಡರು ಕಾಣದಕೆ?
ತಿಳಿಯದೆ ತಪ್ಪಿದರದೆ ಕಾರಣವೆ
ಬಂದುದು ಬಾರದಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮದುವೆ ಆದ ಬ್ರಹ್ಮಚಾರಿ
Next post ನಿನ್ನ ಮುರಳಿಗೆ ಕೊರಳ ತೂಗಲಿ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys